ಶ್ರೀ ನಿ. ಪ್ರ. ಗುರುಮಹಾಂತ ಸ್ವಾಮಿಗಳು ಚಿತ್ತರಗಿ ಇಲಕಲ್ಲ ಪೀಠದ ಅಧಿಕಾರಿಗಳಾಗಿದ್ದರು. ಶ್ರೀ ವಿಜಯಮಹಾಂತ ಶಿವಯೋಗಿಗಳ ತರುವಾಯ ಈ ಮಠದ ಅಧಿಕಾರವನ್ನು ವಹಿಸಿಕೊಂಡರು. ಹಾನಗಲ್ಲ ಶ್ರೀಗಳವರು ಶ್ರೀಗುರು ಮಹಾಂತ ಸ್ವಾಮಿಗಳ ಅಧಿಕಾರದ ಉತ್ಸವವನ್ನು ತಾವೇ ನೆರವೇರಿಸಿದರು. ಶ್ರೀಗಳವರ ಅಪ್ಪಣೆಯಂತೆ ಶ್ರೀ ಗುರುಮಹಾಂತ ಸ್ವಾಮಿಗಳು ಮಂದಿರಿದ ಶ್ರೀ ಶಿವಬಸವ ದೇವರು ನಾಗನೂರು ಮೊದಲಾದ ಸಾಧಕರೊಂದಿಗೆ ಶ್ರೀ ಮಠದಲ್ಲಿ ಇದ್ದು ಒಂದು ಪಾಠಶಾಲೆಯನ್ನು ನಡೆಸುತ್ತಿದ್ದರು. ಪುರಾಣ ಪ್ರವಚನಗಳಿಂದ ಜನತೆಯಲ್ಲಿ ಧರ್ಮ ಜಾಗ್ರತಿಯನ್ನು ತಂದರು. ಮಠದ ಆಸ್ತಿ-ಪಾಸ್ತಿಗಳ ವ್ಯವಸ್ಥೆಯನ್ನು ಚೆನ್ನಾಗಿ ನೋಡಿಕೊಂಡು ಅವುಗಳ ಸದ್ವಿನಿಯೋಗವಾಗುವಂತೆ ಮಾಡಿದರು. ತಮ್ಮ ಮಠದಲ್ಲಿ ಸಂಸ್ಕೃತ ಪಾಠ ಶಾಲೆಯನ್ನು ಸ್ಥಾಪಿಸಿ ನಡೆಯಿಸಿದರು. ಮಂದಿರದ ಹಿತೈಷಿಗಳಾಗಿದ್ದರು. ಅವರೀಗ ಲಿಂಗೈಕ್ಯರಾಗಿದ್ದಾರೆ