ಖೇಳಗಿಯ ಶ್ರೀ ನಿ. ಪ್ರ. ಆದಿನಾಥ (ಶಿವಲಿಂಗ) ಸ್ವಾಮಿಗಳು :1916
ಖೇಳಗಿಯ ಶ್ರೀ ನಿ. ಪ್ರ. ಆದಿನಾಥ (ಶಿವಲಿಂಗ) ಸ್ವಾಮಿಗಳು ವಿರಕ್ತಮಠದ ಅಧಿಕಾರಿಗಳಾಗಿದ್ದಾರೆ. ಮಂಟೂರು (ತಾ. ಹುಬ್ಬಳ್ಳಿ) ಗ್ರಾಮದಲ್ಲಿ ೧೯೦೫ ರಲ್ಲಿ ಜನ್ಮವೆತ್ತಿದರು. ಶಿವಯೋಗ ಮಂದಿರದಲ್ಲಿ ಪಂ. ಶಂಕರಶಾಸ್ತ್ರಿಗಳು ಪಂ. ವೀರಭದ್ರ ಶಾಸ್ತ್ರಿಗಳು ಮತ್ತು ಶ್ರೀ ವ್ಯಾಕರಣಾಳ ಪಟ್ಟದೇವರಿಂದಲೂ ಪಂಚ ಕಾವ್ಯಗಳನ್ನು ಕಲಿತರು.
೧೯೪೧ ರಲ್ಲಿ ಖೇಳಗಿ (ಜಿ. ಬೀದರ, ತಾ. ಹುಮನಾಬಾದ) ಶಿವಲಿಂಗೇಶ್ವರ ಮಠದ ಅಧಿಕಾರವನ್ನು ಪಡೆದರು. ಈ ಮಠವು ಪುರಾತನವಾಗಿದ್ದು ಕರ್ತೃ ಶ್ರೀ ಶಿವಲಿಂಗೇಶ್ವರ ಸ್ವಾಮಿಗಳು ಪರಮ ತಪಸ್ವಿಗಳಾಗಿದ್ದರು. ಶ್ರೀಗಳವರು ಪರಾಧೀನವಾಗಿದ್ದ ಮಠದ ಆಸ್ತಿಗಳನ್ನು ವಶಪಡಿಸಿಕೊಂಡು ಅದರ ಜೀರ್ಣೋದ್ಧಾರವನ್ನು ಮಾಡಿದ್ದಾರೆ;
ಹುಬ್ಬಳ್ಳಿಯಲ್ಲಿರುವ ಹರ್ಷದೇವರ ಮಠಕ್ಕೂ ಅಧಿಕಾರಿಗಳಾಗಿ ಅದರ ಅಭಿವೃದ್ಧಿಯನ್ನು ಮಾಡಿದ್ದಾರೆ. ಕಲಬುರ್ಗಿಯ ಗದ್ದಿಗೆ ಮಠದಲ್ಲಿಯ ಪ್ರಸಾದ ನಿಲಯಕ್ಕೆ ಸಹಾಯಕರಾಗಿ ಕೆಲವು ವರ್ಷ ಸೇವೆ ಸಲ್ಲಿಸಿದ್ದಾರೆ.