ಚಿತ್ತಾಪುರದ ಶ್ರೀ ಘ. ಚ. ಚಂದ್ರಶೇಖರ ಪಟ್ಟಾಧ್ಯಕ್ಷರು :1912

 ಚಿತ್ತಾಪುರದ ಶ್ರೀ ಘ. ಚ. ಚಂದ್ರಶೇಖರ ಪಟ್ಟಾಧ್ಯಕ್ಷರು :1912

ಚಿತ್ತಾಪುರದ ಶ್ರೀ ಘ. ಚ. ಚಂದ್ರಶೇಖರ ಪಟ್ಟಾಧ್ಯಕ್ಷರು ಹಿರೇಮಠದ ಅಧಿಕಾರಿಗಳು. ಅವರು ಸಿರೂರು (ಜಿ. ವಿಜಾಪುರ ತಾ. ಬಾಗಲಕೋಟೆ) ಗ್ರಾಮದಲ್ಲಿ ಶಾ. ಶ. ೧೮೨೦ ಮಾಘ ಬ. ೧೩ ರಂದು ಜನ್ಮ ತಾಳಿದರು.

ಅವರು ಸಿರೂರ ಹಿರಿಯಮಠದ ವತಿಯಿಂದ ಮಂದಿರದಲ್ಲಿ ಪ್ರವೇಶ ಪಡೆದು ಉಮಚಗಿ ಪಂ. ಶಂಕರ ಶಾಸ್ತ್ರಿಗಳು ಮತ್ತು ಪಂ. ವೀರಭದ್ರ ಶಾಸ್ತ್ರಿಗಳಲ್ಲಿ ನ್ಯಾಯ-ಸಾಹಿತ್ಯಗಳ ಅಭ್ಯಾಸ ಮಾಡಿದರು.

೧೯೨೪ರಲ್ಲಿ ಚಿತ್ತಾಪುರ ಮಠದ ಅಧಿಕಾರಿಗಳಾಗಿ ಮಠದ ಜೀರ್ಣೋದ್ಧಾರ ಮಾಡಿದರು. ಭೂಸಂಪತ್ತನ್ನು ಹೆಚ್ಚಿಸಿ ಅದರ ಸದ್ವಿನಿಯೋಗವನ್ನು ಮಾಡುತ್ತಿರುವರು. ನೆರೆಯ ಗ್ರಾಮಗಳಲ್ಲಿ ಪುರಾಣ ಪ್ರವಚನಗಳಿಂದ ಸಾಮಾಜಿಕ ಸೇವೆಯನ್ನು  ಮಾಡುತ್ತಿರುವರು. ಕೆಲವು ವರ್ಷ ಮಂದಿರದಲ್ಲಿ ಸಾಧಕರ ಸಂಸ್ಕೃತ ಶಿಕ್ಷಕರಾಗಿದ್ದರು.