ಜಡೆಯ ಶ್ರೀ ನಿ. ಪ್ರ. ಸಿದ್ಧಬಸವ ಸ್ವಾಮಿಗಳು:(1912)

ಜಡೆಯ ಶ್ರೀ ನಿ. ಪ್ರ. ಸಿದ್ಧಬಸವ ಸ್ವಾಮಿಗಳು:(1912)

ಜಡೆಯ ಶ್ರೀ ನಿ. ಪ್ರ. ಸಿದ್ಧಬಸವ ಸ್ವಾಮಿಗಳು ಮಲೆನಾಡಿನಲ್ಲಿ ಪ್ರಸಿದ್ಧವಾದ ಕುಮಾರ ಮಠದ ಅಧಿಪತಿಗಳು. ಪರಮ ತಪಸ್ವಿಗಳಾದ ಶ್ರೀ ಕುಮಾರ ಕೆಂಪಿನ ಸಿದ್ಧಬಸವ ಸ್ವಾಮಿಗಳು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜಡೆಮಠದ ಕರ್ತೃಗಳು, ಜಡೆಮಠವು ಹಾನಗಲ್ಲ, ಅಕ್ಕಿ ಆಲೂರು ಮೊದಲಾದ ಗ್ರಾಮಗಳಲ್ಲಿರುವ ಮಠಗಳಿಗೆ ಮೂಲವಾಗಿ ಸಂಸ್ಥಾನಮಠವೆಂದು ಪ್ರಸಿದ್ಧವಾಗಿದೆ.

ಶ್ರೀ ಸಿದ್ಧಬಸವ ಸ್ವಾಮಿಗಳು ಮಂದಿರದಲ್ಲಿ ಶಿವಯೋಗ ಮತ್ತು ಕನ್ನಡ-ಸಂಸ್ಕೃತ ಶಿಕ್ಷಣ ಪಡೆದು ಈ ಪೀಠಕ್ಕೆ ಅಧಿಕಾರಿಗಳಾಗಿ ಬಂದರು. ಈ ಮಠಕ್ಕೆ ಸೇರಿದ ಶಾಖಾಮಠಗಳ ಜೀರ್ಣೋದ್ಧಾರ ಕಾರ್ಯವನ್ನು ಮಾಡಿದರು. ಸವದತ್ತಿ ತಾಲೂಕಿನ ಸಿಂದೇಮುನವಳ್ಳಿ  ಮಠವನ್ನು ಶ್ರೀಗಳವರು ಕಲ್ಲಿನಿಂದ ಕಟ್ಟಿಸಿ ಜೀರ್ಣೋದ್ಧಾರ ಮಾಡಿದ್ದಾರೆ. ಅವರು ಶಿವಾನುಭವಿಗಳು ಮತ್ತು ಮಂದಿರದ ಹಿತೈಷಿಗಳೂ ಆಗಿದ್ದಾರೆ.