ಮೊರಬದ ಶ್ರೀ ಘ. ಚ. ಶಂಭುಲಿಂಗ ಪಟ್ಟಾಧ್ಯಕ್ಷರು :೧೯೧೫

ಮೊರಬದ ಶ್ರೀ ಘ. ಚ. ಶಂಭುಲಿಂಗ ಪಟ್ಟಾಧ್ಯಕ್ಷರು :೧೯೧೫

 

ಮೊರಬದ ಶ್ರೀ ಘ. ಚ. ಶಂಭುಲಿಂಗ ಪಟ್ಟಾಧ್ಯಕ್ಷರು  ಹಾನಗಲ್ಲ ಹಿರಿಯ ಮಠದಲ್ಲಿ ಜನ್ಮ ತಾಳಿದರು. ಲಿಂ. ಹಾನಗಲ್ಲ ಶ್ರೀಗಳವರೆ ಬಾಲ್ಯದಲ್ಲಿ ಇವರನ್ನು ಮಂದಿರದಲ್ಲಿ ಶಿಕ್ಷಣಕ್ಕಾಗಿ ಕರೆತಂದರು. ಅವರು ಪಗಡದಿನ್ನಿಯ ಪಂ. ರೇವಣಸಿದ್ಧ ಶಾಸ್ತ್ರಿಗಳಿಂದ ಸಾಹಿತ್ಯ-ವೇದಾಂತ ಶಿಕ್ಷಣ ಪಡೆದು ಸಂಗೀತ-ಯೋಗಗಳಲ್ಲಿ ಸಾಧನೆ ಮಾಡಿದರು. ಪುರಾಣ ಪ್ರವಚನಗಳನ್ನು ಹೇಳುವ ಯೋಗ್ಯತೆ ಪಡೆದರು.

ಅವರು ಕೆಲವು ವರ್ಷ ಮಂದಿರದಲ್ಲಿ ಒಕ್ಕಲುತನದ ವ್ಯವಸ್ಥೆಯನ್ನು ನೋಡಿಕೊಂಡಿದ್ದರು. ಅವರು ಉಸ್ಮಾನಾಬಾದ ಜಿಲ್ಲೆಯಲ್ಲಿರುವ ಮೊರಬ ಗ್ರಾಮದ ಟೆಂಗಿನಮಠದ ಅಧಿಕಾರಿಗಳಾಗಿ ಅಲ್ಲಿ ಪುರಾಣ-ಕೀರ್ತನಗಳಿಂದ ಧರ್ಮಪ್ರಸಾರವನ್ನು ಮಾಡುತ್ತಿರುವರು.

ಸೊಲ್ಲಾಪುರದ ನಾಲ್ವತ್ತವಾಡ ಶ್ರೀ ಶರಣರ ಮಠದಲ್ಲಿ ‘ಕುಮಾರೇಶ್ವರ ಪುರಾಣ’ವನ್ನು ಹೇಳಿ ಜನಾನುರಾಗಿಗಳಾದರು.

ಕ್ರಿ. ಶ. ೧೯೫೫ ರಲ್ಲಿ ತಮ್ಮ ಮಠದಲ್ಲಿ ಏಕಾದಶ ಮಂಟಪ ಪೂಜೆಯನ್ನು ಉತ್ಸಾಹದಿಂದ ನೆರವೇರಿಸಿ ಆ ಕಾಲಕ್ಕೆ ಜ್ಞಾನದಾಸೋಹವನ್ನ ಏರ್ಪಡಿಸಿ ಅಲ್ಲಿಯ ಜನತೆಯಲ್ಲಿ ಹೊಸ ಚೈತನ್ಯ ಒಡಮೂಡುವಂತೆ ಮಾಡಿದರು. ಮಂದಿರದ ವಿಶೇಷ ಕಾರ್ಯಗಳಲ್ಲಿ ತಪ್ಪದೆ ಭಾಗವಹಿಸುತ್ತಾರೆ, ನಿಸ್ಪೃಹ ಸೇವೆ ಸಲ್ಲಿಸುತ್ತಾರೆ.