ಕಲ್ಯಾಣದ ಶ್ರೀ ನಿ. ಪ್ರ. ಜ. ಸಿದ್ಧಲಿಂಗ ಸ್ವಾಮಿಗಳು :(1912)
ಕಲ್ಯಾಣದ ಶ್ರೀ ನಿ. ಪ್ರ. ಜ. ಸಿದ್ಧಲಿಂಗ ಸ್ವಾಮಿಗಳು ಪ್ರಭುಸ್ವಾಮಿ ಮಠದ ಅಧಿಕಾರಿಗಳು. ಇವರನ್ನು ಹುಬ್ಬಳ್ಳಿಯ ಜ. ಗಂಗಾಧರ ಮಹಾಸ್ವಾಮಿಗಳವರೆ ಮಂದಿರದಲ್ಲಿ ಶಿಕ್ಷಣಕ್ಕಾಗಿ ಕಳಿಸಿದ್ದರು. ಅವರನ್ನು ಸಾಮಾನ್ಯವಾಗಿ ಜಡೆಸ್ವಾಮಿಗಳೆಂದು ಕರೆಯುವ ವಾಡಿಕೆ.
ಶ್ರೀ ಜಡೆ ಸ್ವಾಮಿಗಳು ಹೊಸೂರ ಸಿದ್ಧನಕೊಳ್ಳದಲ್ಲಿ ಅನುಷ್ಠಾನ ಮಾಡಿ ಸಿದ್ಧಿ ಪಡೆದವರು. ನಿಡಗುಂದಿ ಕೊಪ್ಪದ ಶಾಖಾಮಠದಲ್ಲಿಯೂ ಕೆಲವು ಕಾಲ ಶಿವಯೋಗಾನುಷ್ಠಾನವನ್ನು ಮಾಡಿದರು.
ಅವರು ಪ್ರಾರಂಭದಲ್ಲಿ ಭಿಕ್ಷೆ ಮಾಡಿ ಮಂದಿರದ ಪ್ರಗತಿಗೆ ಕಾರಣರಾದವರು. ದಾಸೋಹದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ದೂರ್ವಾಸಮುನಿಯಂತೆ ಅವರ ಪ್ರಭಾವ ಬಹು ಉಗ್ರವಾದುದು.
ಆದರೂ ದಯಾಳುಗಳು. ಜಡೆ ಶ್ರೀಗಳು ಬೀರೂರಲ್ಲಿ ನೆಲಸಿ ಅಲ್ಲಿಯ ಶಿಷ್ಯರ ಸಹಕಾರದಿಂದ ಸಂಪಾದನೆ ಮಠದಲ್ಲಿ ‘ಶ್ರೀ ಪ್ರಭುಲಿಂಗ ವಿದ್ಯಾರ್ಥಿ ನಿಲಯ’ವನ್ನು ಸ್ಥಾಪಿಸಿರುವರು.